ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡ್ದ ಕಾರ್ಯಕ್ರಮದಲ್ಲಿ ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಬೇಕೆಂದು ಸಾಹಿತಿಗಳು, ಜನಪ್ರತಿನಿಧಿಗಳು ಹಾಗೂ ನಾನಾ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಶನಿವಾರ ಅಕಾಡೆಮಿಯ ಚಾವಡಿಯಲ್ಲಿ 8ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆ ಬಗ್ಗೆ ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಿದ ರಾಜ್ಯ ಸಭಾ ಸದಸ್ಯ ಬಿ. ಕೆ ಹರಿಪ್ರಸಾದ್ ಜತೆ ಸಂವಾದವೂ ನಡೆಯಿತು.... Read More
News and Events
05
Jan2018
ತುಳುಭಾಷೆ, ಸಂಸ್ಕೃತಿ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಸಮಸ್ತರನ್ನು ಒಗ್ಗೂಡಿಸಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಎ. ಸಿ ಭಂಡಾರಿ ಹೇಳಿದರು.
ನಗರದ ಉರ್ವಾಸ್ಟೋರಿನ ತುಳುಭವನದ ತುಳುಚಾವಡಿಯಲ್ಲಿ ನಡೆದ ಪದ ಸ್ವೀಕಾರ ಕಾರ್ಯಕ್ರಮದಲ್ಲಿ ಅಕಾಡೆಮಿಯ ನೂತನ ಅಧ್ಯಕ್ಷ ಪದವಿ ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ಅಕಾಡೆಮಿಯ ... Read More
January 5, 2018accolade
05
Jan2018
ವಿಶ್ವ ತುಳುವೆರೆ ಪರ್ಬ ೨೦೧೪ರ ಅಂಗವಾಗಿ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ತುಳುನಾಡು ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿಲಾಗಿದೆ. ಸ್ಪರ್ಧಿಗಳು ಛಾಯಾಚಿತ್ರಗಳನ್ನು ಪಿಕ್ಸೆಲ್ಟುಲೈಫ್.ಇನ್ (ಠಿixeಟ೨ಟiಜಿe.iಟಿ) ಈ ಹೆಸರಿನ ಅಂತರ್ಜಾಲದಲ್ಲಿ ನೋಂದಾಯಿಸಬೇಕು. ಈ ಬಗ್ಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ‘ತುಳುನಾಡಿನ ವಿಶೇಷತೆಗಳು’ ಎಂಬ ಶಿರೋನಾಮೆಯಲ್ಲಿ ಈ ಕೆಳಗಿನ ವಿಭಾಗಳಲ್ಲಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಛಾಯಾಚಿತ್ರಗಳು ತುಳುನಾಡಿನ ಪ್ರೇಕ್ಷಣೀಯ ಸ್ಥಳಗಳ ಮಹತ್ವವನ್ನು ಎತ್ತಿ ತೋರಿಸುವಂತಿರಬೇಕು.
ವಿಭಾಗಗಳು:- ಡಿಜಿಟಲ್
ಎ – ... Read More
January 5, 2018accolade
05
Jan2018
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಅಡ್ಯಾರ್ ಇವರ ಸಕಾರದೊಂದಿಗೆ “ವಿಕಿ ಪೀಡಿಯಾದಲ್ಲಿ ತುಳು ಭಾಷೆಯ ಲೇಖನಗಳನ್ನು ಬರೆಯುವ ಕಮ್ಮಟವನ್ನು ದಿನಾಂಕ ೨೬-೧೧-೨೦೧೪ ರಿಂದ ೨೮-೧೧-೨೦೧೪ ರವರೆಗೆ ಮೂರು ದಿನಗಳಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಅಡ್ಯಾರ್ನಲ್ಲ್ಲಿ ಹಮ್ಮಿಕೊಳ್ಳಲಾಗಿದೆ.
ಕಮ್ಮಟದ ಉದ್ಘಾಟನಾ ಸಮಾರಂಭವು ದಿನಾಂಕ ೨೬-೧೧-೨೦೧೪, ಬುಧವಾರ ಬೆಳಗ್ಗೆ ೧೦.೦೦ ಕ್ಕೆ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ, ಎಸ್.ವಿ.ಪಿ ಕನ್ನಡ ಅಧ್ಯಯನ ... Read More
January 5, 2018accolade
05
Jan2018
ನವೆಂಬರ್ ೨೯: ತುಳು ಅಕಾಡೆಮಿ ಚಾವಡಿಯಲ್ಲಿ – ‘ಡಾ ಪಾದೂರು ಗುರುರಾಜ ಭಟ್ಟರ ನೆನಪು ಮತ್ತು ಉಪನ್ಯಾಸ’
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಾಲ್ಬಾಗ್, ಮಂಗಳೂರು ಇಲ್ಲಿನ ಚಾವಡಿಯಲ್ಲಿ ನವೆಂಬರ್ ತಿಂಗಳ ೨೯ನೇ ತಾರೀಕು ಶನಿವಾರದಂದು ಅಪರಾಹ್ನ ಗಂಟೆ ೩.೦೦ಕ್ಕೆ ‘ಡಾ ಪಾದೂರು ಗುರುರಾಜ ಭಟ್ಟರ ನೆನಪು ಮತ್ತು ಅವರ ಸ್ಟಡೀಸ್ ಇನ್ ತುಳುವ ಹಿಸ್ಟರಿ ಎಂಡ್ ಕಲ್ಚರ್ ಕೃತಿಯ ... Read More
January 5, 2018accolade
05
Jan2018
ತುಳು ಗೀತಗಾಯನ ಕಮ್ಮಟ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಝೇಂಕಾರ ಗಾನಕಲಾ ಕೇಂದ್ರ (ರಿ), ಮಂಗಳೂರು, ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ ಇವರ ಸಕಾರದೊಂದಿಗೆ “ತುಳು ಗೀತಗಾಯನ ಕಮ್ಮಟ ವನ್ನು ದಿನಾಂಕ ೦೨-೧೧-೨೦೧೪ ರಿಂದ ೦೪-೧೧-೨೦೧೪ ರವರೆಗೆ ಮೂರು ದಿನಗಳಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಭಾಂಗಣ ಮಂಗಳೂರು ಇಲ್ಲ್ಲಿ ಹಮ್ಮಿಕೊಳ್ಳಲಾಗಿದೆ. ಕಮ್ಮಟದ ಉದ್ಘಾಟನಾ ಸಮಾರಂಭವು ದಿನಾಂಕ ೦೨-೧೧-೨೦೧೪, ಆದಿತ್ಯವಾರ ಬೆಳಗ್ಗೆ ೦೯.೩೦ ಕ್ಕೆ ನಡೆಯಲಿದ್ದು, ಎಸ್.ಡಿ.ಎಮ್ ಸಂಸ್ಥೆಯ ... Read More
January 5, 2018accolade